ಅಭಿಪ್ರಾಯ / ಸಲಹೆಗಳು

11 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ರೂ 2000 -ಗಳ ಒಂದು ಬಾರಿ ನೆರವು

ಕೋವಿಡ್-19ರ 2ನೇ ಅಲೆಯ ತಡೆಗೆ ಸರ್ಕಾರವು ಲಾಕ್‍ಡೌನ್ ಘೋಷಿದ ಪರಿಣಾಮವಾಗಿ ಕಾರ್ಮಿಕರಿಗೆ ಆರ್ಥಿಕವಾಗಿ ನಷ್ಟವಾಗಿರುವುದನ್ನು ಗಮನಿಸಿ ಸನ್ಮಾನ್ಯ ಮುಖ್ಯ ಮಂತ್ರಿಯವರು ಹಲವು ವರ್ಗದವರಿಗೆ ಪರಿಹಾರ ಧನವನ್ನು ಘೋಷಿಸಿರುತ್ತಾರೆ. ಅವುಗಳಲ್ಲಿ,  11 ವರ್ಗಗಳ  ಅಸಂಘಟಿತ ಕಾರ್ಮಿಕರಾದ “ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈಲರ್ಗಳು, ಮೆಕ್ಯಾನಿಕ್, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಹಾಗೂ ಭಟ್ಟಿ ಕಾರ್ಮಿಕ”ರಿಗೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ರೂ.2,000/-ಗಳ  ಒಂದು ಬಾರಿಯ ನೆರವನ್ನು ನೀಡಲಾಗುವುದು.

 

ಘೋಷಿತ ನೆರವನ್ನು ಪಡೆಯಲು, ಮೇಲ್ಕಂಡ ವೃತ್ತಿಯಲ್ಲಿ ತೊಡಗಿರುವ ಅರ್ಹ ಫಲಾನುಭವಿಗಳು   https://sevasindhu.karnataka.gov.in/    ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬೇಕಾಗಿದ್ದು, ಅವುಗಳನ್ನು ಪರಿಶೀಲಿಸಿ ಫಲಾನುಭವಿಗಳ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ ತಲಾ ರೂ.2000/-ಗಳ ಪರಿಹಾರವನ್ನು ವರ್ಗಾಯಿಸಲಾಗುತ್ತದೆ.

 

ಸರ್ಕಾರದ  ಆದೇಶದನ್ವಯ, 2020ನೇ ಸಾಲಿನ ಲಾಕ್ಡೌನ್ ಅವಧಿಯಲ್ಲಿ ಸರ್ಕಾರದಿಂದ ಘೋಷಿಸಲ್ಪಟ್ಟ ರೂ.5000/-ಗಳ ಒಂದು ಬಾರಿಯ ನೆರವನ್ನು ಪಡೆದ ಅಗಸರು ಮತ್ತು ಕ್ಷೌರಿಕರು ಈ ಸಲ ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಪ್ರಸಕ್ತ ಸಾಲಿನಲ್ಲಿ 65 ವರ್ಷ ಪೂರೈಸಿದ ಫಲಾನುಬವಿಗಳನ್ನು ಹೊರತುಪಡಿಸಿ ಉಳಿದ ಅರ್ಹ ಫಲಾನುಭವಿಗಳಿಗೆ ಘೋಷಿತ ನೆರವನ್ನು ಈ ಹಿಂದೆ  ಪಾವತಿಸಿದ ಮಾದರಿಯಲ್ಲಿ ಅವರ  ಬ್ಯಾಂಕ್ ಖಾತೆಗೆ ನೇರವಾಗಿ ಬಿಡುಗಡೆಗೊಳಿಸಲಾಗುವುದು.

 

ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ನೋಂದಣಿಯಾದ ಫಲಾನುಭವಿಗಳಿಗೆ ಸಂಬಂಧಿಸಿದಂತೆ, ಅರ್ಹ ಫಲಾನುಭವಿಗಳ ಕುಟುಂಬದ ಓರ್ವ ಸದಸ್ಯರಿಗೆ ನಿಯಮಾನುಸಾರ ಘೋಷಿತ ನೆರವನ್ನು ಪಾವತಿಸಲಾಗುವುದು.

 

ಉಳಿದ ಫಲಾನುಭವಿಗಳು https://sevasindhu.karnataka.gov.in/    ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬೇಕಾಗಿದ್ದು, ವಿವರ ಈ ಕೆಳಗಿನಂತಿದೆ:

 

 

ಷರತ್ತುಗಳು:

  1. ವಯೋಮಿತಿ: 18 ರಿಂದ 65 ವರ್ಷಗಳು
  2. ಕುಟುಂಬದಲ್ಲಿ ಒಬ್ಬರಿಗೆ ಮಾತ್ರ.
  3. ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಮಾತ್ರ
  4. ಕರ್ನಾಟಕದಲ್ಲಿ ಮೇಲ್ಕಂಡ ವೃತ್ತಿಯಲ್ಲಿ ತೊಡಗಿರುವ ವಲಸೆ ಕಾರ್ಮಿಕರು ಸಹ ಅರ್ಹರು. (ಕರ್ನಾಟಕ ರಾಜ್ಯದ ಬಿ.ಪಿ.ಎಲ್ ಕಾರ್ಡ್ ಹೊಂದಿದ್ದಲ್ಲಿ).
  5. ಆಧಾರ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಹೊಂದಿರುವುದು ಕಡ್ಡಾಯ..
  6. ಅರ್ಜಿದಾರರ ವ್ಯಾಲಿಡ್ ಮೊಬೈಲ್ ಸಂಖ್ಯೆ (ಐಚ್ಛಿಕ).

 

ಪೂರಕ ದಾಖಲೆಗಳು:

  1. ವೃತ್ತಿ ನಿರ್ವಹಿಸುತ್ತಿರುವ ಕುರಿತು ನಿಗದಿತ ನಮೂನೆಯಲ್ಲಿ ಅಧಿಕಾರಿಗಳಿಂದ ಅಥವಾ ಉದ್ಯೋಗದಾತರಿಂದಪಡೆದ ಉದ್ಯೋಗ ದೃಢೀಕರಣ ಪ್ರಮಾಣ ಪತ್ರ.
  2. ಬಿ.ಪಿ.ಎಲ್ ಕಾರ್ಡ್
  3. ಆಧಾರ್ ಕಾರ್ಡ್
  4. ಜನ್ಮ ದಿನಾಂಕ ದಾಖಲೆ.
  5. ಪಾಸ್‍ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ.

ಸೇವಾ ಸಿಂಧು ಪೊರ್ಟ್ಲ್ನಲ್ಲಿ ಅರ್ಜಿಯ ಸಂಸ್ಕರಣೆಯ ವಿಧಾನ

  1. ಅರ್ಜಿದಾರರು ಸೇವಾ ಸಿಂಧು ಪೋರ್ಟ್‍ಲ್ ಮೂಲಕ ಮೇಲ್ಕಂಡ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದು.
  2. ಅರ್ಜಿ ಸಲ್ಲಿಸಿದ ಪ್ರತಿ ಅರ್ಜಿದಾರರಿಗೆ ಅರ್ಜಿ ಸ್ವೀಕೃತಿಯ ಕುರಿತು ವಿಶಿಷ್ಠ ಗುರುತಿನ ಸಂಖ್ಯೆಯನ್ನು ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಸಂದೇಶ ರವಾನಿಸಲಾಗುವುದು.
  3. ನೋಂದಾಯಿತ ಅರ್ಜಿದಾರರು ಅರ್ಜಿ ಸ್ವೀಕೃತಿಯ ಸಮಯದಲ್ಲಿ ಪಡೆದ ವಿಶಿಷ್ಠ ಗುರುತಿನ ಸಂಖ್ಯೆಯನ್ನು ಬಳಸಿ ಸಲ್ಲಿಸಿದ ಅರ್ಜಿಯ ಸ್ಥಿತಿಯ ಕುರಿತು ಮಾಹಿತಿ ಪಡೆಯಬಹುದು.
  4. ಸಲ್ಲಿಸಿದ ಅರ್ಜಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ/ಪರಿಶೀಲನೆಗಾಗಿ ಕಳುಹಿಸಲಾಗುವುದು.
  5. ಸೂಕ್ತ ಪರಿಶೀಲನೆಯ ನಂತರ, ಅರ್ಹ ಫಲಾನುಭವಿಗಳ ಆಧಾರ್ ಜೋಡಣೆಯ ಬ್ಯಾಂಕ್ ಖಾತೆಗೆ ಪರಿಹಾರದ ಮೊತ್ತವನ್ನು ಡಿ.ಬಿ.ಟಿ. ಮೂಲಕ ನೇರ ವರ್ಗಾವಣೆ ಮಾಡಲಾಗುವುದು.

ನಿಗದಿತ ನಮೂನೆ ಹಾಗೂ ಇತರೆ ವಿವರ:

 

ಕ್ರ.ಸಂ.

ವಿವರ

ಭಾಷೆ

ಗಾತ್ರ

ಡೌನ್ಲೋಡ್

01

ಉದ್ಯೋಗ ದೃಢೀಕರಣ ಪತ್ರ (ಅಧಿಕಾರಿಗಳಿಂದ ಪಡೆಯಲು)

ಕನ್ನಡ

787.ಕೆ.ಬಿ

ವೀಕ್ಷಿಸಿ

02

ಉದ್ಯೋಗ ದೃಢಿಕರಣ ಪತ್ರ (ಉದ್ಯೋಗದಾತರಿಂದ ಪಡೆಯಲು)

ಕನ್ನಡ

901.48 ಕೆ.ಬಿ

ವೀಕ್ಷಿಸಿ

03

ಸರ್ಕಾರಿ ಆದೇಶ

ಕನ್ನಡ

 1.32 ಎಂ.ಬಿ

ವೀಕ್ಷಿಸಿ

04

ರೂ.2000/-ಗಳ ನೆರವಿನ ಮೊತ್ತವನ್ನು ಪಡೆದ ಫಲಾನುಭವಿಗಳ ವಿವರ

ಇಂಗ್ಲೀಷ್

 -

ವೀಕ್ಷಿಸಿ

05

ಅರ್ಜಿ ಸಲ್ಲಿಸುವ ಕುರಿತು ಬಳಕೆದಾರರ ಕೈಪಿಡಿ

ಕನ್ನಡ

2.20 ಎಂ.ಬಿ

ವೀಕ್ಷಿಸಿ

06 ಅರ್ಜಿ ಸಲ್ಲಿಸುವ ಕುರಿತು ವೀಡಿಯೋ ಕೈಪಿಡಿ - - ವೀಕ್ಷಿಸಿ

ಇತ್ತೀಚಿನ ನವೀಕರಣ​ : 13-12-2023 03:54 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080